ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Thursday, May 12, 2011

ಮಲ್ಲಿಗೆ

 
ಮುಂಜಾವಿನ ಮಂಜಿನ
ಹನಿಗಳನ್ನೋತ್ತ ಮಲ್ಲಿಗೆ
ನೀ ಯಾರಿಗಾಗಿ ಕಾಯುವೇ ?


ನೇಸರ ಕಿರಣಕ್ಕೆ
ಮೆಲ್ಲನೆ ಆರಳುವೆ
ನೀ ಯಾರ ಮುಡಿಗೆ ಸೇರುವೆ?


ದುಂಬಿಯ ಗುಂಗಿನಲ್ಲೇ 
ಮಧುರಸವ ತುಂಬುವೆ
ನೀ ಯಾರ ಪ್ರೀತೀಗಾಗಿ ಕಾಯುವೆ?


ಸಿಹಿಜೇನದುಂಬಿಗೆ ನೀಡಿ
ಪಾತರಗಿತ್ತಿಯ ಸ್ಪರ್ಶ ಮಾಡಿ 
ಜನ್ಮ ಸಾರ್ಥಕ ಪಡೆಯುವೆ


ಶ್ರೀಗಂಧದ ಸಿಂಚನ ಹರಿಸಿ
ಘಮ್ಮನೆ ಸುವಾಸನೆ ಬೆರಸಿ
ದೇವರ ಪಟ್ಟಕ್ಕೇರುವೆ


ಹೆಂಗಳೆಯರ ಮನಸ ಸೆಳೆವೆ
ಏಕಾಂತದಿ ಮನವ ಬೆಸೆವೆ
ಪ್ರೀತಿ  ಬೆಳೆಸಿ ಗೆಲ್ಲುವೆ


ಒಂದು ದಿನ ಅರಳಿದರೂ
ಸಂಜೆಯಲಿ ಬಾಡಿದರೂ
ನಿನ್ನ ಬದಕು ಸಾರ್ಥಕ ಮಲ್ಲಿಗೆ....!!!

Thursday, May 5, 2011

ಅಂತಿಮ ವರ್ಷದ ಕಾಲೇಜು ಬೀಳ್ಕೋಡುಗೆ ಸಮಾರಂಭ - 2011-12 ಒಂದಿಷ್ಷು ಮೆಲುಕು - 1

ಪ್ರೀತೀಯ ನೆಚ್ಚಿನ ಸ್ನೇಹಿತ/ಯಿರೇ.,


ನಾನು ಗಿರೀಶ್ ಕೋರೇಗಾಲ. 
ಇದು ನನ್ನ ಕಾಲೇಜು ದಿನದಲ್ಲಿನ ಅಂತಿಮ  ಕ್ಷಣದಲ್ಲಿ ಭಾವಪೂರ್ಣವಾದ ಕಣ್ಣಂಚಲ್ಲಿ  ಕಣ್ಣೀರತುಂಬಿದ ನನ್ನ ಎಲ್ಲಾ ಪ್ರೀತಿಯ ಸ್ನೇಹಜೀವಿಗಳಿಗೆ ಮುಡಿಪು.
ನನ್ನ ಕಾಲೇಜು ಜೀವನವು ಬಹಳ ಸುಂದರವಾಗಿತ್ತು. ಇಂದು ಅದು ಕೇವಲ ನೆನಪು. ಮತ್ತೆ ಮತ್ತೆ ಬಿಕ್ಕಿ-ಬಿಕ್ಕಿ ಉಮ್ಮಳಿಸಿಬರುವ ಆಳುವಿನ ನಡುವೆ ನನ್ನ ಸ್ನೇಹಿತರಿಗೆ ತುಂಬು ಹೃದಯದಿಂದ ದೇವರು ಎಲ್ಲರಿಗೂ ಆರೋಗ್ಯದ ಜೊತೆ ಉತ್ತಮ ಜೀವನವನ್ನು ದೊರಕಿಸಲೇಂದು ಬೇಡುತ್ತೆನೆ. 


ಇಂತಿ..
ಬೇಸರಗೊಂಡ ಸ್ನೇಹಿತ 
ಗಿರೀಶ್ ಕೋರೇಗಾಲ
9008906608.
9738745333.
9449325420.

ಕಾಲೇಜುದಿನಗಳು ತುಂಬಾ ಸಂತೋಷವಾಗಿದ್ದರಿಂದ , ನನ್ನ ಪಾಲಿಗೆ ಎಂದರೇ ಎಲ್ಲಾ ವಿಧ್ಯಾರ್ಥಿ ಜೀವನದಲ್ಲಿನ ಪ್ರತಿ ಘಳಿಗೆಯಲ್ಲೂ ನೆನಪಿಡುವಂತಹಡುವುದು, ಬಾಲ್ಯದಲ್ಲಿನ ಪುಂಡತನ, ಸ್ನೇಹದ ಒಡನಾಟದಲ್ಲಿ ಅಪಾರ ರೀತಿಯಲ್ಲಿ ಸ್ನೇಹವನ್ನು ಆಪಾರವಾದ ರೀತಿಯಲ್ಲಿ ಗಳಿಸಿ ಮರೆತಿರಬಹುದು. ನಾನು ಸಮಾಜಶಾಸ್ತ್ರ ವಿಧ್ಯಾರ್ಥಿಯಾದ್ದರಿಂದ  ಈ ಸಮಯದಲ್ಲಿ ನಮ್ಮ ಶಾಸ್ತ್ಞ್ರರ ಮಾತು ನೆನಪಿಗೆ ಬರುತ್ತದೆ.  " ಮಾನವನು ಸಮಾಜ ಜೀವಿ" ಇವನ ಸಂಬಂಧವು ಸಾಮಾಜಿಕವಾಗಿ ಹರಡಿಕೊಂಡಿರುವ ಒಂದು ಬಲೆಯಂತೆ ಎಂದು". ಈ ಮೇಲಿನ ವಾಕ್ಯವು ಎಷ್ಟೋಂದು ಸತ್ಯವಲ್ಲವೇ...??!

      ನಿತ್ಯ ಜೀವನದಲ್ಲಿ ಬಾಲ್ಯದ ನೆನಪುಗಳನ್ನು ಸವಿಯುತ್ತಾ ಅಪ್ಪ-ಅಮ್ಮರನ್ನೆ ನೆಚ್ಚಿಕೊಂಡು ಪ್ರಾಥಮಿಕ-ಮಾಧ್ಯಮಿಕ ವಿಧ್ಯಾಭ್ಯಾಸವನ್ನು ಮುಗಿಸಿದ ನಂತರ ಫ್ರೌಢವಸ್ಥೆಯಲ್ಲಿ ನಮ್ಮನ್ನು ಬಂದು ಸೇರುವುದು ಮೆಚ್ಚಿನ ಗೆಳತನ. ಒಬ್ಬರಿಗೆ ಒಬ್ಬರು ಬಿಡಲಾರದ ನಂಟು.

   ಅದೇ ರೀತಿ ಈ ಹಿಂದಿನ ವಿದ್ಯಾಬ್ಯಾಸದಲ್ಲಿನ ನಂಟು ಇಂದಿಗೂ ಹಲವಾರು ರೀತಿಯ ಗೆಳತನವನ್ನು ಸೃಷ್ಟಿಸಿದ್ದರೆ. ಅದು ಆ ಹಂತದ ಗೆಳತನ ಮುಗಿಯವವರಗೆ ಮಾತ್ರ . ನನ್ನ ಪ್ರಾಥಮಿಕ ಹಂತದ ಸ್ನೇಹಿತರು ಇಂದಿಗೂ ಸಿಕ್ಕರೆ ನನಗೆ ಸಂತೋಷವಾಗುತ್ತದೆ. ಅದೇ ರೀತಿ ನಾನು ಇಂದು ಕೂಡ ಅವರನ್ನು ಅಂದಿನ ಖುಷಿಯಿಂದಲೇ ಮಾತನಾಡಿಸುತ್ತೇನೆ. ಹಿರಿಯ ಹಂತದಲ್ಲಿ ಸುಮಾರು 20ಜನರಿದ್ದ ನಾವು ಸದಾ ಉತ್ಸುಕತೆಯಿಂದ ಎಲ್ಲಾ ತೆರನಾದ ಕಾಯ್ರಕ್ರಮದಲ್ಲಿ ಭಾಗಿಯಾಗಿದ್ದೆವೆ.  ಏಕೆಂದರೇ ಸ್ನೇಹಿತರು ನನ್ನ ಯಶಸ್ಸಿನ ಮೆಟ್ಟಿಲುಗಳಿಗೆ ಏರಲು ಸಹಾಯ ಮಾಡಿದ ಏಣಿಯಾ ಹಾಗೇ. ಇಂದಿಗೂ ನನ್ನ ಸ್ನೇಹಿತರನ್ನು ನೆನೆಪಿಸಿಕೊಳ್ಳುತ್ತೆನೆ.


ನಂತರ ಪ್ರೌಢಶಾಲಾ ಸರದಿ 


ಈ ಹಂತದ ವಿಧ್ಯಾಭ್ಯಾಸದಲ್ಲು ಇದೇ ರೀತಿಯದು. ಎಲ್ಲರೂ ತಮ್ಮ ತಮ್ಮಲ್ಲಿ ಇಂದಿಗೂ ಕೂಡ ನನ್ನ ಸ್ನೇಹಿತರು ಸಿಕ್ಕರು ನಗುವಿನಲ್ಲಿಸ್ವಾಗತಿಸುತ್ತೇನೆ.  ಇಂದಿಗೂ ಅಪಾರವಾದ ಸ್ನೇಹ ಬಳಗವು ಪ್ರೌಢಶಾಲಾ ಅವಧಿಯಲ್ಲಿದೆ.
ಕೆಲವು ಸ್ನೇಹಿತರ ಹೆಸರನ್ನು ಹೇಳಲು ಬಯಸುವೆ
ರಾಜೇಗೌಡ. ಸಿದ್ದರಾಜೇಗೌಡ, ಸುನೀಲ್ , ಪೂರ್ಣಿಮಾ, ಶೃತಿ ನೆಲಮಾಕನಹಳ್ಳಿ
ಕಾವ್ಯಶ್ರೀ, ಚೈತ್ರ, ಧನಲಕ್ಷ್ಮಿ ದ್ವಯರು, ಅನಿಲ್ ಕುಮಾರ್ (ಬಡ್ಡಿ), ಪ್ರತೀಪ್ ಕುಮಾರ್ ಟಿ.ಜೆ, ಹನುಮಂತ, ತಳಗವಾದಿ ಸ್ನೇಹಿತರು,
ಪ್ರತಾಪ. ಮಹೇಶ ಡಿ.ವಿ. ಭವ್ಯ, ಚಂದನ್. ರವಿಕುಮಾರ್.ರಾಜೇಶ. ರೇವಣ್ಣ, ದೇವಿಪುರ
ಗಿರೀಶ್ (ಗಿಳಿಮರಿ), ನಂದೀಶ್(ಗೊಜ್ಜು), ಕುಮಾರ್, ಗೊಣ್ಣೆ ಶ್ರೀನಿವಾಸ, ಶೃತಿ ಲಂಬು. ಕಾಗೇಪುರ.
ಹಂಗೇ ನಮ್ಮೂರು ಹತ್ರ ಬಂದರೇ ಕೆಂಪೇಗೌಡ, ಲಕ್ಷ್ಮಮ್ಮ, ಮಾದಹಳ್ಳಿ.


ನಮ್ಮೂರು ಕೋರೇಗಾಲ ದಿನವು ಮುಂದಿನ ಸರದಿಯಲ್ಲಿ....... ಮುಂದುವರಿಯುವುದು











Sunday, May 1, 2011

ಸ್ನೇಹ-ಪ್ರೇಮ -ಆಸರೆ

ಸ್ನೇಹ-ಪ್ರೇಮ

ಸ್ನೇಹ
ಸೌಮ್ಯವಾಗಿ
ಅರಳಿಸುತ್ತದೆ
ಪ್ರೇಮ
ಕ್ರೂರವಾಗಿ
ನರಳಿಸುತ್ತದೆ.

ಆಸರೆ

ತಿಳಿಯಬೇಕು
ಪ್ರೇಮಿಗಳೊಂದು
"ಖರೆ"
ಆನ್ಯೋನ್ಯತೆ
ಪ್ರೀತಿಗೆ 
'ಆಸರೆ'