ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Thursday, May 24, 2012

ಹನಿಗವನ - 1 ಸೇವೆ

ಬಣ್ಣ ಬಣ್ಣದ ಅಕ್ಷರಗಳಿಂದ 
ಬೀಗುತ್ತವೆ
ಬೀದಿ ಬೀದಿಗಳಲ್ಲಿ
ಜಾಹಿರಾತೀನ ಫಲಕಗಳು
ಯಾವ ಅಕ್ಷರಗಳನ್ನೂ 
ಶಾಶ್ವತವಾಗಿ
ತಮ್ಮೂಳಗೆ ಉಳಿಸಿಕೊಳ್ಳದೆ
ನಿಸ್ವಾರ್ಥ ಸೇವೆ ಸಲ್ಲಿಸುತ್ತಿವೆ
ಶಾಲೆಗಳಲ್ಲಿನ ಕಪ್ಪು ಹಲಗೆಗಳು...!!!

Tuesday, January 10, 2012

ನಿನ್ನ ನೀರಿಕ್ಷೆಯಲ್ಲಿ

ಬರೆದಷ್ಟು ಮುಗಿಯುತಿಲ್ಲ ನಿನ್ನ ಚೆಲುವಿನ ಕವನ
ನಿದಿರೆ ಬರುತಿದ್ದರೂ ಕಣ್ಮುಚ್ಚುತಿಲ್ಲ ನಿನ್ನ ಕನಸಿನಲಿ ನನ್ನ ನಯನ
ಮಿಡಿಯುತಿದೆ ಹೃದಯ ಹೇಗೆ ಬಣ್ಣಿಸಲಿ ಅದರ ಖುಷಿಯನ್ನ
ಕಳೆದು ಹೋಗುವ ಆಸೆ ನಿನ್ನೊಳಗೆ ಕಾಯುತಿರುವೆ ಆ ಕ್ಷಣವನ್ನ !

... ಏನಾಗಿದೆ ಏಕಾಗಿದೆ ಏನೊಂದು ಅರಿವಿಲ್ಲ
ಸುಮ್ಮನೆ ಮನ ಹಾಗೆ ಆನಂದದಿ ಹಾರಡ ತೊಡಗಿದೆಯಲ್ಲ
ಮನದಿ ಏನೋ ಮಧುರ ಭಾವನೆ ಮನೆ ಮಾಡಿದೆಯಲ್ಲ
ನಿನ್ನ ನೆನಪಿನಲಿ ನಾ ಹಾಗೆ ಸುಮ್ಮನೆ ಕಳೆದು ಹೋಗಿರುವೇನಲ್ಲ !

ಮನದಲಿ ಮಾತಾಡುವ ಮಾತುಗಳು ನೂರಿದ್ದರೂ ಮೂಕನಾಗಿ ನಿಂತಿರುವೆ
ನಿನ್ನ ಪ್ರೀತಿಯ ನೆನಪಿನಲಿ ನಾ ಮೈ ಮರೆತಿರುವೆ
ಅರಿಯದೆ ಹೋದ ಗೆಳತಿ ನೀ ಏಕೆ ಮರೆಯಾಗಿರುವೆ
ಅರಿತು ನನ್ನ ಹೃದಯವ ನೀನೆಂದು ಬಾಳಿಗೆ ಬರುವೆ !

ಹೃದಯದ ಭಾಷೆಗೆ ಹೊಸತನ ತಂದವಳು ನೀನು
ಆಡುವ ಪ್ರತಿ ಮಾತಿಗೂ ಹೊಸ ಅರ್ಥ ಕೊಟ್ಟವಳು ನೀನು
ಹಾಗೆ ಸುಮ್ಮನೆ ನಲಿದಾಡುವ ಮನಸಾಗಿದೆ ಅದಕೆ ಕಾರಣವೇನು
ಓ ಗೆಳತಿ ನಿನಗೆ ಇದೆಲ್ಲ ಅರಿವಾಗಿ ನನ್ನ ಬಳಿಗೆ ಬರಲು ಸಾದ್ಯವಿಲ್ಲವೇನು
ತುಂಬಿ ಕೊಂಡಿದೆ ಹೀಗೆ ನನ್ ಮನದ ತುಂಬೆಲ್ಲ ಪ್ರಶ್ನೆಗಳ ಭಾನು !

ಒಲವಿನ ಪ್ರಿಯ ಲತೆ ನೀನಾಗ ಬಲ್ಲೆಯೇನು
ಕಣ್ಣ ಕನಸಿನೊಳಗೆ ನೀ ಅವಿತು ಕುಳಿತಿಲ್ಲವೇನು
ನನ್ನ ಮನದ ಭಾವನೆ ನಿನಗೆ ಅರಿವಾಗುವುದಿಲ್ಲವೇನು
ನಿನ್ನ ನೀರಿಕ್ಷೆಯಲಿ ಕಾದು ಕುಳಿತಿರುವೆ ನಾನು !

Saturday, October 22, 2011

ಚಿಟ ಪಟ ಹನಿ


ಯಾಕೋ ಗೊತ್ತಾಗುತ್ತಿಲ್ಲ
ಬೇಡವೆಂದರೂ ತನ್ ತಾನೇ
ಸುರಿಯುತ್ತಿದೆ ಕಣ್ಣೀರು
ನೆನಪುಗಳ ತೋಯಿಸುತ್ತಾ.

ರೆಪ್ಪೆ ತೆರೆದಿಟ್ಟರೆ
ತೊಟ್ಟಿಕ್ಕುವ ಜಲಪಾತ
ಮುಚ್ಚಿದರೆ,
ಒಳಗೆ ಜಲಪ್ರಳಯ.
ಹರಿವ ನೀರೊಳಗೂ
ಕೆಂಡದಷ್ಟು ಕಾವು.

ಒಮ್ಮೆ
ಮುಗಿಲೇ ಅಪ್ಪಳಿಸುವಷ್ಟು
ಅಥವಾ
ನೆಲ ಕಚ್ಚುವಷ್ಟು
ಮಳೆ ಬಂದು
ಈ ರಾಡಿಯನ್ನೆಲ್ಲ ತೊಳೆದು
ಶುದ್ಧಮಾಡಬಾರದೇ
ಅನ್ನುವ ತವಕ.

Thursday, August 25, 2011

ಸ್ನೇಹ ಅಮರ: ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ,ಮುಂಗೈಗೆ ಜಾ...

ಸ್ನೇಹ ಅಮರ:

ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ,
ಮುಂಗೈಗೆ ಜಾ...
: ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ, ಮುಂಗೈಗೆ ಜಾರಿದ ಆಲಿಕಲ್ಲು ನೀನು; ಆ ತಂಪಾದ ಸ್ಪರ್ಶಹಿತ ಸವಿದ ಕ್ಷಣವನು, ಏನೆಂದು ಬಣ್ಣಿಸಲಿ ನಾನು. ಚುಮು ಚುಮು ಮು...

Saturday, August 13, 2011

ಮೌನದೊಳಗಿನ ಬೆಂಕಿ

ಈ ನೆಲದ ಎದೆಯಲ್ಲಿ ಬೆಂಕಿ
ಉರಿವ ಧಗೆಯಲ್ಲಿ
ಕಳಚಿ ಬಿದ್ದ ಗೂಡು
ಹಕ್ಕಿ ನಿಟ್ಟುಸಿರು,
ಸಾವು, ಸೇಡು ಕೂಗು.


ಹೆಪ್ಪುಗಟ್ಟಿದ ಮೌನ
ಹೆಡೆಯಾಡುವ ಹೊಗೆ
ಜೀವ ಬೇಡುತ್ತದೆ ಇರುಳಿಗೆ
ಹೆಜ್ಜೆ ಹಾಕುವ ಹಗಲು
ಸಂಜೆ ಸರಹೊತ್ತಿನಲ್ಲಿ
ಸತ್ತು ಹೋದವು ಹೂವು,

ಮುಂದುವರಿಯುವುದು...!