ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Saturday, February 21, 2009

ಪ್ರೀತಿಗೊಂದು ಎಚ್ಚರದ ಪಿಸುಮಾತು


ಹೊಚ್ಚ ಹೊಸ ಪ್ರೀತಿಯಲಿ
ಕೊಚ್ಚಿ ಹೋಗುವ  ಮುನ್ನ 
ಎಚ್ಚರದ ಮಾತೋಂದ ಕೇಳು ಗೆಳತಿ..!

ಚುಚ್ಚು ಮಾತುಗಳಲ್ಲ
ಬಿಚ್ಚು  ಮನಸಿನ ನುಡಿಯ
ರೊಚ್ಚಿಗೆಬ್ಬಿಸಿದಲ್ಲಿ ಕ್ಷಮಿಸು ಗೆಳತಿ..!

ನಿಚ್ಚಳದ ಪಥದಲ್ಲಿ 
ಹುಚ್ಚು ಪ್ರೀತಿಯ ದಾರಿ...
ತುಚ್ಚ ಮಾತುಗಳೆಲ್ಲ ಕೇಳಿತು ನಿನಗೆ..!

ಕೊಚ್ಚಿ ಹೋಗುವ ಕೋಪ
ಕಿಚ್ಚು ಹಚ್ಚುವ ತಾಪ..
ಮುಚ್ಚಿ ಬಿಡು ನಿನ್ನಯ ಮನದ  ಒಳಗೆ,

ಮೆಚ್ಚುಗೆಯು ಇದ್ದಲ್ಲಿ
ನೆಚ್ಚಿಗೆಯು ಇದ್ದಲ್ಲಿ
ಕೆಚ್ಚೆದೆಯು ನಿನ್ನೋಳಗೆ ಇರಲೇಬೇಕು.

ಮುಚ್ಚುಮರೆ ಒಳಿತಲ್ಲ
ಬೆಚ್ಚುವುದು ಬೇಕಿಲ್ಲ
ಸಚರಿತೆಯಲಿ ನಡೆಯುವುದೇ ಸಾಕು,

ಬಚ್ಚಿಟ್ಟ ಕನಸುಗಳನ್ನು ಬಿಚ್ಚಿಡುವವಳಾಗು
ನೊಚ್ಚು  ನೂರಾಗುವ ಭಯ ಬೇಡ ನಿನಗೆ
ಸ್ವಚ್ಚ ಬದುಕಿಗೆ ನನ್ನ ಬೆಚ್ಚಗಿನ ಹಾರೈಕೆ
ಸದಾನಂದ ನಿನ್ನ ಬಾಳ ದೀವಟಿಗೆಗೆ...

3 comments:

  1. namaste...

    its really nice.... tumba sogasagide....

    ReplyDelete
  2. ತುಂಬು ಹೃದಯದ ಧನ್ಯವಾದಗಳು

    ReplyDelete
  3. ಕಾಲೇಜು ಸಂಚಿಕೆಯಲ್ಲಿ ಈ ನನ್ನ ಕವಿತೆ ಹೆಸರನ್ನು ತಪ್ಪಾಗಿ ನಮೂದಿಸಲಾಗಿದೆ.

    ನನ್ನ ಹೆಸರಿಗೆ ಬದಲಾಗಿ ಮಹೇಶ್ ಎಂದು ಹಚ್ಚಿಸಿಲಾಗಿದೆ.
    ಇದಕ್ಕೆ ನನ್ನ ಪ್ರಬಲ ವಿರೋಧವಿದೆ.
    ಇದಕ್ಕೆ ನೇರ ಹೊಣೆ.
    ಶಾಂತಿಕಿರಣ ವಾರ್ಷಿಕ ಸಂಚಿಕೆ ಸಂಪಾದಕ ಮಂಡಳಿ.
    ಇನ್ನಾದರೂ ಎಚ್ಚೇತುಕೊಳ್ಳಿ.
    ಯುವಬರಹಗಾರಿಗೆ ಪ್ರೂತ್ಸಾಹ ಕೊಡಿ.

    ReplyDelete